Powered by Blogger.

Wednesday, March 25, 2015

ಕಂದಾಯ ಜಿಲ್ಲಾ ಮಟ್ಟದ ಶಾಲಾ ತರಕಾರಿ ತೋಟ ಅಭಿವೃದ್ಧಿಯಲ್ಲಿ ಮಂಗಲ್ಪಾಡಿ ಸರಕಾರಿ ಹಿರಿಯ ಮಾಧ್ಯಮಿಕ ಶಾಲೆಗೆ ತೃತೀಯ ಸ್ಥಾನ ಲಭಿಸಿದೆ. ತರಕಾರಿ ತೋಟ ಅಭಿವೃದ್ಧಿಗಾಗಿ ಮುತುವರ್ಜಿ ವಹಿಸಿದ ಅಧ್ಯಾಪಕರಾದ ಉಮೇಶ್ ನಾಯಕ್, ಪ್ರಕಾಶನ್ ಇ ಆರ್ ಮತ್ತಿತರರು ಮುಖ್ಯೋಪಾಧ್ಯಾಯಿನಿ ಲತ ಅವರೊಂದಿಗೆ.

Friday, March 6, 2015

ಮಂಗಲ್ಪಾಡಿಯಲ್ಲಿ ಕಾವ್ಯ ಝೇಂಕಾರ

ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಮಂಗಲ್ಪಾಡಿ ಸರಕಾರಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಕಾವ್ಯಝೇಂಕಾರ ಕಾರ್ಯಕ್ರಮ ಜರಗಿತು. ಹವ್ಯಾಸಿ ಯಕ್ಷಗಾನ ಕಲಾವಿದೆ, ನಿವೃತ್ತ ಕನ್ನಡ ಭಾಷಾ ಅಧ್ಯಾಪಿಕೆ ಜಯಲಕ್ಷ್ಮಿ ಕಾರಂತ ಮತ್ತು ದಿವ್ಯಾ ಕಾರಂತ ಮಂಗಲ್ಪಾಡಿ ತುರಂಗ ಭಾರತದಿಂದ ಆಯ್ದ ಅಭಿಮನ್ಯುವಿನ ಸಾಹಸದ ಕಥಾಮೃತವನ್ನು ಮಧುರವಾಗಿಯೂ ವೈವಿಧ್ಯಮಯವಾಗಿಯೂ ನಡೆಸಿಕೊಟ್ಟರು. ಸಮಾರಂಭವನ್ನು ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಕೇಶವ ಪ್ರಸಾದ ನಾಣಿತ್ಲು ಉದ್ಘಾಟಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎಸ್ ವಿ ಭಟ್ಟ ಅಧ್ಯಕ್ಷತೆ ವಹಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಉಮ್ಮರ್ ಅಪೋಲೋ, ಶಾಲಾ ಮುಖ್ಯೋಪಾಧ್ಯಾಯಿನಿ ಲತ ಕೆ. ಕನ್ನಡ ಸಾಹಿತ್ಯ ಪರಿಷತ್ತಿನ ಕಾಸರಗೋಡು ತಾಲ್ಲೂಕು ಘಟಕದ ಅಧ್ಯಕ್ಷ ರಾಘವ ಬಲ್ಲಾಳ್, ಶಾಲಾ ಅಧ್ಯಾಪಕ ಸಂಘದ ಸಂಚಾಲಕ ವಸಂತ ಕುಮಾರ್ ಸಿಕೆ ಶುಭ ಹಾರೈಸಿದರು. ಕನ್ನಡ ಭಾಷಾ ಅಧ್ಯಾಪಿಕೆ ಸುನೀತ ಸ್ವಾಗತಿಸಿ ಸಮಾಜ ವಿಜ್ಞಾನ ಅಧ್ಯಾಪಕ ಉಮೇಶ್ ನಾಯ್ಕ್ ವಂದನಾರ್ಪಣೆಗೈದರು. ಮೂರ್ತಿ ನಾಯ್ಕಾಪು ನಿರೂಪಣೆ ಮಾಡಿದರು.

THANK YOU...visit again....

 photo sculjpg_zpsf45fe30f.jpg  photo grop2_zpse47e73cc.jpg  photo group_zpsc7f6e26f.jpg  photo P1000980_zps764c8b73.jpg  photo 16_zps1e430375.jpg  photo 15_zpsc2b37b7d.jpg  photo 14_zpsdc40f499.jpg  photo 13_zpsdb503dae.jpg  photo 10_zps1484e233.jpg  photo 9_zps3fc85212.jpg  photo 8_zps42505a73.jpg  photo 7_zps4d2e909c.jpg  photo 6_zps880d8420.jpg  photo 5_zps8795a4cc.jpg  photo 3_zps5ea5a583.jpg  photo 2_zps852c66de.jpg  photo 1_zpsde135223.jpg